ನಮ್ಮ ತಿಳಿವಿಗೆ ,ಚಿಂತನೆಗೆ ಸಹಾಯವಾಗಬಹುದೆಂಬ ಪ್ರೇರಣೆಯಿಂದ ಹೀಗೆ ಬರೆಸಿತೋ,ಅಥವಾ ಆ ಪ್ರೇರಣೆಯಿಂದಲೇ ಈ ಯೋಚನೆ ಬಂದು ಬರೆದೆನೋ ಅಂತು ಈ ವರ್ಷದ ಅಮೂಲ್ಯ ಘಟನೆಗಳು ಇಲ್ಲಿ ಮುದ್ರಿತವಾಗಬಹುದು.....ಸುಖಾನುಭವಗಳು ಕಳೆದು ಹೋಗುತ್ತೆ.ಆದರೆ ದುಃಖ....?ಬದುಕಿನಲ್ಲಿ ನೋವು,ದುಃಖಗಳು ಯಾಕಿರಬೇಕು...?ಅವು ಅನಿವಾರ್ಯವೇ.....?ಎನ್ನುವ ವ್ಯರ್ಥ ಪ್ರಶ್ನೆಗಿಂತ ಅವು ನಮ್ಮನ್ನು ಯಾವ ದಾರಿಯಲ್ಲಿ ನಡೆಸಬಹುದು....ಎಂತ ವಿಫಲತೆಯ ಅಥವಾ ಸಿದ್ಧಿಯ ಕಡೆ ನಮ್ಮನ್ನು ಸಾಗಿಸಬಹುದು ....?ಎನ್ನುವ ಪ್ರಶ್ನೆ ಹೆಚ್ಚು ಅರ್ಥಯುತವಾಗಿ ಕಂಡಿದ್ದರಿಂದ ಹೀಗಾಯಿತೇನೋ......?? ಗುರಿಯಿಲ್ಲದ ಹಾಯಿ ದೋಣಿಯಂತೆ ಸಾಗುವ ಈ ಬದುಕಿಗೆ ನಾವಿಗನಾರು....?ಆಸೆಯಿಲ್ಲದೆ ಬದುಕು ಸಾಗುವುದೇ...? ಇಲ್ಲವಲ್ಲ.....ಬದುಕನ್ನು ವಿಮಶ್ರೀಸಲು ನಾವ್ಯಾರು ...?ಎತ್ತ ಕರೆವುದೋ, ಅತ್ತ ಸಾಗುವುದೇ ......ಬದುಕಲ್ಲವೇ.....?? ಬದುಕನ್ನು,ಬದುಕಿಸಿ ..ಬದುಕಲು ಬಿಡಿ......ಇದೇ ಸದಾಶಯಗಳೊಂದಿಗೆ......ಬದುಕುತ್ತಿರುವ.....???? ನಿಮ್ಮ ಲ್ಲೊಬ್ಬಳು.......ಎನ್ನಬಬಹುದೇ....?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ