Pages

ಫೆಬ್ರವರಿ 21, 2012

ಮನ್ವಂತರ..

ಧೋ...ಎಂದು ಸುರಿಯುತ್ತಿದ್ದ ಮಳೆ.....ಅದರ ಶಬ್ದಕ್ಕೆ ಕಿವಿಗೊಡಲು ಒಪ್ಪದ ಮನವನ್ನು ತಹಬದಿಗೆ ತರುವಲ್ಲಿ ವಿಫಲವಾದರೂ.....ಮನಸ್ಸು ಓಡುವ ದಿಕ್ಕಿನತ್ತ ನಡೆಯತೊಡಗಿದೆ. ನಾನು ,ನಾನಾಗಿರಲಿಲ್ಲ.....ಬಹುದೂರ ನೆಡೆದೆ.. ನಡೆದೆ.. ಸಮುದ್ರದಲ್ಲಿ ತೇಲುವ ನೌಕೆಯಂತೆ ಮನ ತೊಳಲಾಟದಲ್ಲಿ ಹೊಯ್ದಾಡುತಿತ್ತು...ಅದರಾಳದಲ್ಲೇ ತಲ್ಲೀನಳಾದೆ......ಮನಕ್ಕೆ ತಂಪೆರೆವ ಅನುಭೂತಿ....ಅದರ ಬೆನ್ನಲ್ಲೆ ಸಾಗಿದೆ....ಅದ್ಭುತವಾದ, ವರ್ಣಿಸಲು ಅತೀತವಾದಂತಹ, ಮನಕ್ಕೆ ಮುದವೆನಿಸುವ ಗಾಢವಾದ ಪ್ರೀತಿಯ ಸಿಂಚನ...! ಮೃದುವಾದ ಕೈಗಳಿಂದ ಸವರಿದೆ....ಅಲ್ಲಿಯವರೆಗೆ ನನಗೆ ಅಂತಹ ಒಂದು ಅನುಭೂತಿ ಅರಿವಾಗಿರಲೇ ಇಲ್ಲ...ಲೋಕದಲ್ಲಿ ಸೃಸ್ಟಿಯ ವಿಚಿತ್ರ ಇಸ್ಟು ಅದ್ಭುತವೆಂದು ಅನಿಸಿರಲೇ ಇಲ್ಲ....ನೋಡುತ್ತಲೇ ಇದ್ದೆ...ಸಂತಸದ ಕ್ಷಣಗಳೊಂದಿಗೆ......ಹರಿದ ಕಣ್ಣೀರ ಧಾರೆ...ಪನ್ನೀರಿನೊಂದಿಗೆ...! ವಿಷಾದದ ಕಣ್ಣೀರು ಸೇರಿ ವಿಜೃಂಭಿಸಿತ್ತು......ವಿಧಿ ಹಣೆಬರಹವನ್ನು ಬರೆದಾಗಿತ್ತು...ನನಗದರ ಪರಿವೇ ಇರಲಿಲ್ಲ...ಪುಟ್ಟ ಹೃದಯದಲ್ಲಿ ಬೆಚ್ಚಗಿನ ಅನುಭವಗಳ  ಸರಮಾಲೆ....ಅದರೊಂದಿಗೆ ಅವರ್ಣನೀಯ ಸಂತಸದ ಪುಟ ಪುಟಗಳ ಪದರದೊಳಗೆ, ನನ್ನ ಬರಿದಾದ  ಮನಸ್ಸಿನ ನಿಗೂಢ ಅರಿವಾಗುವುದಾದರೂ ಹೇಗೆ..? ನೋವಿನ ನಗೆ ಚೆಲ್ಲಿ ಉದಾರತೆ ಮೆರೆದದ್ದಸ್ಟೆ...ಜಗತ್ತಿನಲ್ಲಿ ಸಂತಸಕ್ಕೆ ಹಿಗ್ಗದವರ್ಯಾರು..? ಆದರೆ ಅದರ ಬೆನ್ನಲ್ಲೇ ಇರುವ ಚೂರಿಯ ಇರಿತ ಅರಿವಾಗಲೇ ಇಲ್ಲ....ಕತ್ತಲೆಯ ನಂತರ ಬೆಳಕಿರುವುದು ಎಸ್ಟು ಸತ್ಯವೋ ಅಸ್ಟೇ ಸತ್ಯ..ನನ್ನ ಸಂತಸದಲ್ಲಿ ವಿಷಾದದ ಛಾಯೆ...ಪ್ರೀತಿಯ ಮಧುರ ಸಿಂಚನದೊಂದಿಗೆ, .....ಎಂದಿಗೂ ಮಾಯದ ಗಾಯದೊಡನೆ .... ಬದುಕಿನಾ ಅರ್ಥವನು ಹುಡುಕಾಡುತ್ತಿರುವೆ....ಹುಡುಕಾಡುವುದೇ ಬದುಕು ಅಲ್ಲವೇ....? ಬದುಕಿನಾ ಅರ್ಥವನು ತಿಳಿದವರಿಹರೇ...???    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ